ಕನ್ನಡಾಂಬೆಗೆ ನುಡಿ ನಮನ

ಸುವರ್ಣನಾಡಿನ ಸ್ವರ್ಣ ಮುಕುಟ | ಮಣಿ ದಾರಿಣಿ ಕನ್ನಡತಿಯೇ.
ಶ್ರೀಗಂಧದ ನಾಡಿನ ಚಂದದ ಮಾಲೆಯ | ಧರಿಸಿದ ಶಾರದೆಯೇ.
ಅರಿಶಿನ ಕುಂಕುಮ ಮುಖ ಮಂಡಲ | ಲೇಪಿತ ಸುಮಂಗಲಿಯೇ.
ಹಸಿರಿನ ವನರಾಸಿಯ ಜೀವದ ಜಲ | ಧಾರೆಯ ಓಡಲೋಳ್ ತುಂಬಿಹ ವರದಾಯಿನಿಯೇ.
ವೀರಾಧಿ ವೀರರ ತೋಳ್ಬಲದಲಿ ನೆಲೆಸಿಹ ಶಕ್ತಿ ಪ್ರಧಾಯಿನಿಯೇ.
ಸಾಹಿತ್ಯ ಸಂಗೀತಗಾರರ ನಾಲಿಗೆಯಲಿ ಸದಾ ನಲಿದಾಡುವ ಸರಸ್ವತಿಯೇ.
ನಾಟ್ಯ-ಶಿಲ್ಪ ಕಲಾ ವೈಭವವ ಕಾಲಡಿಮೆಟ್ಟಿನಿಂತ ಶಾಂತಲೆಯೇ.
ಕನ್ನಡ ಭಾಷೆಯ ಸ್ವರ ಸಾಮ್ರಾಜ್ಞಿ ಕರುಣಾಳು ಜನರ ತಾಯಿ ಭುವನೇಶ್ವರಿಯೇ.
ಇದೋ ನಿನಗೆ ವಂದನೆ- ವಂದನೆ ಅಭಿನಂದನೆ…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನಂತರ
Next post ಮನ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys